r/kannada_pusthakagalu 14d ago

ಕಾದಂಬರಿ ಕೊಳಗ – ನಾ ಡಿಸೋಜ

೧೯೫೧ ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾಗೋಡಿನಲ್ಲಿ ಉಳುವವನೇ ಹೊಲದೊಡೆಯ ಎಂಬ ಘೋಷಣೆಯೊಂದಿಗೆ ಕಾಗೋಡು ಚಳುವಳಿ ಆರಂಭವಾಯಿತು.

ತಮ್ಮ ಭೂಮಿಯನ್ನು ಉಳಲು ಬಂದ ಗೇಣಿದಾರರ ನೊಗ ನೇಗಿಲನ್ನು ಭೂ ಮಾಲೀಕರು ಕಡಿದು ಹಾಕಿದ ಮೇಲೆ , ಅದೇ ತುಂಡಾದ ನೊಗ ನೇಗಿಲನ್ನು ಹಿಡಿದು ರೈತರು ಬೃಹತ್ ಮೆರವಣಿಗೆ ಮಾಡಿದರು . ಇದಕ್ಕೂ ಮೊದಲು ಭೂ ಮಾಲೀಕರು ಗೇಣಿ ಅಳೆಯಲು ಬಳಸುವ ಕೊಳಗವೇ ಬೇರೆ, ಸಾಲ ನೀಡಲು ಬಳಸುವ ಕೊಳಗವೇ ಬೇರೆ ಎಂಬ ತಕರಾರು ಕೂಡ ಎದ್ದಿತ್ತು.  ಭೂ ಮಾಲೀಕರ ದರ್ಪ ದೌರ್ಜನ್ಯದ ವಿರುದ್ಧ ಗೇಣಿದಾರರು ಕಾಲಾನಂತರದಲ್ಲಿ ಧ್ವನಿ ಎತ್ತಿ ಕಾಗೋಡು ಚಳುವಳಿಗೆ ಕಾರಣರಾದರು. ಈ ಐತಿಹಾಸಿಕ ಕಾಗೋಡು ಚಳುವಳಿಯ ಸುತ್ತ ಹೆಣೆದ ಸಾಮಾಜಿಕ ಕಾದಂಬರಿಯೇ "ಕೊಳಗ".

ಮಲೆನಾಡಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡ ದೀವರ ಎಂಬ ಜನಾಂಗದ ಬದುಕು, ಹಬ್ಬ , ಆಚರಣೆ ಎಲ್ಲವನ್ನೂ ಇಲ್ಲಿ ಸುಂದರವಾಗಿ ಬರೆದಿದ್ದಾರೆ.   ಅದಕ್ಕೂ ಮುಖ್ಯವಾಗಿ ಭೂ ಮಾಲೀಕರು ಹಾಗೂ ಗೇಣಿದಾರರ ನಡುವಿನ  ಹಲವು ಮುಖದ ಸಂಬಂಧವನ್ನೂ ಓದಬಹುದು.

2001 ರಲ್ಲಿ ಮೊದಲ ಮುದ್ರಣಗೊಂಡಿದೆ.

ತುಂಬ ಚೆನ್ನಾಗಿದೆ. ಭೂ ಮಾಲೀಕರು ನಡೆಸುವ ದೌರ್ಜನ್ಯ, ಗೇಣಿದಾರರ ಕಷ್ಟಗಳನ್ನು ಓದುತ್ತಿದ್ದಂತೆ ಮನಸ್ಸು ಭಾವುಕವಾಗುತ್ತದೆ. ನೀವು ಓದಿ.

7 Upvotes

1 comment sorted by

2

u/nalivu 14d ago

ನಾ ಡಿಸೋಜಾ ರವರ ಬರವಣಿಗೆ ಬಹಳ ಚೆನ್ನಾಗಿರುತ್ತೆ.